Mr. Kumar Mangalam Birla

ಶ್ರೀ ಕುಮಾರ ಮಂಗಲಂ ಬಿರ್ಲಾ

ಅಧ್ಯಕ್ಷರು,
ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್.

ಶ್ರೀ ಕುಮಾರ ಮಂಗಲಂ ಬಿರ್ಲಾ ಅವರು ಆದಿತ್ಯ ಬಿರ್ಲಾ ಗುಂಪಿನ ಅಧ್ಯಕ್ಷರಾಗಿದ್ದಾರೆ.

ಭಾರತ ಮತ್ತು ಜಗತ್ತಿನಾದ್ಯಂತದ ಸಮೂಹದ ಪ್ರಮುಖ ಕಂಪನಿಗಳ ಆಡಳಿತ ಮಂಡಳಿಗೆ ಅವರು ಅಧ್ಯಕ್ಷರಾಗಿದ್ದಾರೆ. ಜಾಗತಿಕವಾಗಿ ಈ ಸಮೂಹದಡಿ ಇರುವ ಸಂಸ್ಥೆಗಳಲ್ಲಿ ನಾವೆಲಿಸ್, ಕೊಲಂಬಿಯನ್ ಕೆಮಿಕಲ್ಸ್, ಆದಿತ್ಯ ಬಿರ್ಲಾ ಮಿನರಲ್ಸ್, ಆದಿತ್ಯ ಬಿರ್ಲಾ ಕೆಮಿಕಲ್ಸ್, ಥಾಯ್ ಕಾರ್ಬನ್ ಬ್ಲ್ಯಾಕ್, ಅಲೆಕ್ಸಾಂಡ್ರಿಯಾ ಕಾರ್ಬನ್ ಬ್ಲ್ಯಾಕ್, ಡೊಮ್ಸ್‌ಜೊ ಫ್ಯಾಬ್ರಿಕರ್ ಮತ್ತು ಟೆರೇಸ್ ಬೇ ಪಲ್ಪ್ ಮಿಲ್ ಸೇರಿವೆ. ಭಾರತದಲ್ಲಿ, ಅವರು ಹಿಂಡಾಲ್ಕೊ, ಗ್ರಾಸಿಮ್, ಅಲ್ಟ್ರಾಟೆಕ್, ವೊಡಾಫೋನ್ ಐಡಿಯಾ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಅಧ್ಯಕ್ಷತೆ ವಹಿಸುತ್ತಾರೆ.

ಸಮೂಹದ ವ್ಯವಹಾರಗಳು ಹಲವು ಉದ್ಯಮಗಳಲ್ಲಿ ಹರಡಿಕೊಂಡಿವೆ. ಇವುಗಳಲ್ಲಿ ಅಲ್ಯುಮೀನಿಯಂ, ತಾಮ್ರ, ಸಿಮೆಂಟ್, ವಸ್ತ್ರೋದ್ಯಮ (ತಿರುಳು, ನಾರು, ದಾರ, ಬಟ್ಟೆ ಮತ್ತು ಬ್ರ್ಯಾಂಡೆಡ್ ಉಡುಪುಗಳು), ಇಂಗಾಲದ ಪುಡಿ, ಇನ್ಸುಲೇಟರ್‌ಗಳು, ನೈಸರ್ಗಿಕ ಸಂಪನ್ಮೂಲಗಳು, ಸೌರ ವಿದ್ಯುತ್, ಕೃಷಿಉದ್ಯಮ, ಟೆಲಿಕಮ್ಯುನಿಕೇಷನ್, ಹಣಕಾಸು ಸೇವೆಗಳು, ರಿಟೇಲ್ ಮತ್ತು ವ್ಯಾಪಾರ ಸೇರಿವೆ.

ವ್ಯವಹಾರ ದಾಖಲೆ

ತಮ್ಮ ತಂದೆಯ ಅಕಾಲಿಕ ಮರಣದ ಬಳಿಕ 1995 ರಲ್ಲಿ 28 ವರ್ಷ ವಯಸ್ಸಿನ ಶ್ರೀ ಬಿರ್ಲಾ ಅವರು ಸಮೂಹದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡರು. ಅಧ್ಯಕ್ಷರಾಗಿ, ಶ್ರೀ ಬಿರ್ಲಾ ಅವರು ಆದಿತ್ಯ ಬಿರ್ಲಾ ಸಮೂಹವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ 24 ವರ್ಷಗಳಲ್ಲಿ ಅವರು ಸಮೂಹದ ಚುಕ್ಕಾಣಿ ಹಿಡಿದು ಮುನ್ನಡೆಸಿದ್ದಾರೆ, ಬೆಳವಣಿಗೆಯನ್ನು ಹೆಚ್ಚಿಸಿದ್ದಾರೆ, ಯೋಗ್ಯತಾನುಸಾರ ಉದ್ಯೋಗಿಗಳ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ ಮತ್ತು ಪಾಲುದಾರರ ಮೌಲ್ಯವನ್ನು ಹೆಚ್ಚಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಅವರು, 1995 ರಲ್ಲಿ US$ 2 ಶತಕೋಟಿಯಷ್ಟು ಇದ್ದ ಸಮೂಹದ ವಹಿವಾಟಿನ ಪ್ರಮಾಣವನ್ನು ಇಂದು US$ 48.3 ಶತಕೋಟಿಗೆ ಏರಿಸಿದ್ದಾರೆ. ಸಮೂಹ ಕಾರ್ಯನಿರ್ವಹಿಸುವ ವಲಯಗಳಲ್ಲಿ ಜಾಗತಿಕ/ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಲು ಶ್ರೀ ಬಿರ್ಲಾ ಅವರು ವ್ಯವಹಾರಗಳನ್ನು ಮರುಕ್ರಮಗೊಳಿಸಿದ್ದಾರೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಅವರು 20 ವರ್ಷಗಳಲ್ಲಿ 36 ಸಂಸ್ಥೆಗಳ ಖರೀದಿ ಮಾಡಿದ್ದು, ಇದು ಭಾರತೀಯ ಬಹುರಾಷ್ಟ್ರೀಯ ಕಂಪನಿ ಮಾಡಿದ ಅತ್ಯಧಿಕ ಸ್ವಾಧೀನವಾಗಿದೆ.

ಭಾರತೀಯ ಕಂಪನಿಯಿಂದ ಎರಡನೇ ಅತಿದೊಡ್ಡ ಖರೀದಿ ಎನಿಸಿಕೊಂಡಿರುವ, 2007 ರಲ್ಲಿನ ಜಾಗತಿಕ ಲೋಹ ಉದ್ಯಮದ ಪ್ರಮುಖ ಸಂಸ್ಥೆ ನಾವೆಲಿಸ್‌ನ ಖರೀದಿಯು, ಭಾರತೀಯ ಕಂಪನಿಗಳಿಗೆ ಹೊಸ ಗೌರವ ತಂದುಕೊಟ್ಟಿತು ಹಾಗೂ ದೇಶದಲ್ಲಿ ಹೆಚ್ಚಿನ ಮಟ್ಟದ ಆಸಕ್ತಿ ಮೂಡುವುದಕ್ಕೂ ಕಾರಣವಾಯಿತು. ವಿಶ್ವದ 3ನೇ ಅತಿದೊಡ್ಡ ಇಂಗಾಲದ ಪುಡಿ ಉತ್ಪಾದಕ ಎನಿಸಿಕೊಂಡಿರುವ ಅಮೆರಿಕ ಮೂಲದ ಕೊಲಂಬಿಯನ್ ಕೆಮಿಕಲ್ಸ್ ಕಂಪನಿಯ ಖರೀದಿಯಿಂದಾಗಿ, ತನ್ನ ಸ್ವಂತ ಇಂಗಾಲದ ಪುಡಿ ವಹಿವಾಟನ್ನು ಪರಿಗಣಿಸಿ, ಸಮೂಹ ಈಗ ಈ ವಲಯದಲ್ಲಿ ನಂ. 1 ಸ್ಥಾನದಲ್ಲಿದೆ. ಅದೇ ರೀತಿ ವಿಶೇಷ ತಿರುಳು ಉತ್ಪಾದಿಸುವ ಸ್ವೀಡನ್ ದೇಶದ ಪ್ರಮುಖ ಸಂಸ್ಥೆ ಡೊಮ್ಸ್‌ಜೊ ಫ್ಯಾಬ್ರಿಕರ್ ಖರೀದಿಯಿಂದಾಗಿ ಸಮೂಹದ ತಿರುಳು ಮತ್ತು ನಾರು ವ್ಯವಹಾರದಲ್ಲಿ ಸಮೂಹ ತನ್ನ ಜಾಗತಿಕ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಸಾಧ್ಯವಾಗಿದೆ. ಜರ್ಮನಿಯಲ್ಲಿನ ಪಾಲಿಮರ್‌ಗೆ ಸಂಬಂಧಿಸಿದ ರಾಸಾಯನಿಕಗಳು ಮತ್ತು ತಂತ್ರಜ್ಞಾನಗಳ ಸಂಸ್ಥೆ ಸಿಟಿಪಿ- ಜಿಎಂಬಿಎಚ್ ಖರೀದಿಯು ಇನ್ನೊಂದು ಮೈಲಿಗಲ್ಲಾಗಿದೆ. 

ಇತ್ತೀಚೆಗೆ, ನಮ್ಮ ಸಮೂಹ ಸಂಸ್ಥೆಯಾದ ನಾವೆಲಿಸ್ ಮೂಲಕ ಶ್ರೀ ಬಿರ್ಲಾ ಅವರು, 2.6 ಶತಕೋಟಿ ಡಾಲರ್‌ ಮೊತ್ತಕ್ಕೆ ಅಮೆರಿಕದ ಪ್ರಮುಖ ಲೋಹ ಉದ್ಯಮ ಸಂಸ್ಥೆಯಾದ ಅಲೆರಿಸ್‌ಗೆ ಬಿಡ್ ಮಾಡಿದ್ದಾರೆ.

ಇವುಗಳಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಶ್ರೀ ಬಿರ್ಲಾ ಅವರು ಕೆನಡಾ, ಚೀನಾ, ಇಂಡೊನೇಷ್ಯಾದಲ್ಲಿ ಉತ್ಪಾದನಾ ಘಟಕಗಳನ್ನು ಮತ್ತು ಆಸ್ಟ್ರೇಲಿಯಾದಲ್ಲಿ ಗಣಿಗಳನ್ನು ಖರೀದಿಸಿದ್ದಾರೆ, ಈಜಿಪ್ಟ್, ಥೈಲ್ಯಾಂಡ್ ಮತ್ತು ಚೀನಾದಲ್ಲಿ ಹೊಸ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. ಇದರ ಜೊತೆಗೆ, ಸಮೂಹದ ಎಲ್ಲ ಉತ್ಪಾದನಾ ಘಟಕಗಳಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಿದ್ದಾರೆ.

ಭಾರತದಲ್ಲೂ ಕೂಡ ಅವರು ಪ್ರಮುಖ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಮಾಡಿದ್ದು, ಇವುಗಳಲ್ಲಿ (ಆಯ್ದ ಪಟ್ಟಿ ಮಾತ್ರ) ಜೇಪೀ ಸಿಮೆಂಟ್ ಘಟಕಗಳು, ಲಾರ್ಸೆನ್ ಮತ್ತು ಟುಬ್ರೋದ ವಿಭಾಗವಾದ ಬಿನಾನಿ ಸಿಮೆಂಟ್, ಅಲ್ಕನ್‌ನಿಂದ ಇಂಡಾಲ್, ಕೋಟ್ಸ್ ವಿಯೆಲ್ಲಾದಿಂದ ಮಧುರಾ ಗಾರ್ಮೆಂಟ್ಸ್, ಕನೊರಿಯಾ ಕೆಮಿಕಲ್ಸ್ ಮತ್ತು ಸೊಲಾರಿಸ್ ಕೆಮ್‌ಟೆಕ್ ಇಂಡಸ್ಟ್ರೀಸ್‌ನ ವಿಭಾಗವಾದ ಕ್ಲೋರ್ ಅಲ್ಕಲಿ ಸೇರಿವೆ.

ಶ್ರೀ ಬಿರ್ಲಾ ಅವರ ನೇತೃತ್ವದಲ್ಲಿ ನಡೆದ ಇತ್ತೀಚಿನ ವೊಡಾಫೋನ್ ಮತ್ತು ಐಡಿಯಾ ವಿಲೀನವು ಭಾರತದಲ್ಲಿ ಅತಿದೊಡ್ಡ ಮತ್ತು ಜಗತ್ತಿನ ಎರಡನೇ ಅತಿಡೊದ್ದ ಟೆಲಿಕಾಂ ಆಪರೇಟರ್ ಅನ್ನು ಸೃಷ್ಟಿಸಿದೆ.

ಅವರ ನೇತೃತ್ವದಲ್ಲಿ, ಆದಿತ್ಯ ಬಿರ್ಲಾ ಕಾರ್ಯನಿರ್ವಹಿಸುವ ಎಲ್ಲ ಪ್ರಮುಖ ವಲಯಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, 42 ವಿವಿಧ ದೇಶಗಳಿಗೆ ಸೇರಿದ 120,000 ಅಸಾಧಾರಣ ಉದ್ಯೋಗಿಗಳಿಂದ ನಡೆಸಲ್ಪಡುವ ಅತ್ಯಂತ ಯಶಸ್ವಿ ಯೋಗ್ಯತಾನುಸಾರ ಸಿಬ್ಬಂದಿ ವ್ಯವಸ್ಥೆಯ ಸಂಸ್ಥೆಯನ್ನು ಶ್ರೀ ಬಿರ್ಲಾ ನಿರ್ಮಿಸಿದ್ದಾರೆ. ಎಒನ್ ಹೆವಿಟ್, ಫಾರ್ಚೂನ್ ಮ್ಯಾಗಜಿನ್ ಮತ್ತು ಆರ್‌ಬಿಎಲ್ (ಕಾರ್ಯತಂತ್ರದ ಎಚ್‌ಆರ್‌ ಮತ್ತು ನಾಯಕತ್ವ ಸಲಹಾ ಸಂಸ್ಥೆ) ನಡೆಸಿದ 2011 ರ 'ನಾಯಕರಿಗಾಗಿ ಅಗ್ರ ಸಂಸ್ಥೆಗಳು' ಅಧ್ಯಯನದಲ್ಲಿ ಆದಿತ್ಯ ಬಿರ್ಲಾ ಸಮೂಹ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಏಷ್ಯಾ ಪೆಸಿಫಿಕ್‌ನಲ್ಲಿ 1ನೇ ಸ್ಥಾನದಲ್ಲಿದೆ. ನೀಲ್‌ಸನ್ಸ್‌ ಅವರ 2014-15 ರ ಕಾರ್ಪೊರೇಟ್ ಇಮೇಜ್ ಮಾನಿಟರ್‌ನಲ್ಲಿ ಸಮೂಹ ಅಗ್ರಸ್ಥಾನ ಪಡೆದಿದೆ ಮತ್ತು ಸತತ ಮೂರನೇ ವರ್ಷ 'ಅತ್ಯುತ್ತಮ ದರ್ಜೆಯ' ನಂಬರ್ 1 ಕಾರ್ಪೊರೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. 2018 ರಲ್ಲಿ ಎಒಎನ್-ಹೆವಿಟ್ ಅವರಿಂದ 'ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಉದ್ಯೋಗದಾತರು' ಎನ್ನುವ ಪ್ರತಿಷ್ಠಿತ ಮನ್ನಣೆಗೆ ಸಮೂಹ ಮತ್ತೊಮ್ಮೆ ಪಾತ್ರವಾಗಿದೆ.

ವಿವಿಧ ನಿಯಂತ್ರಕ ಮಂಡಳಿಗಳಲ್ಲಿ ಪ್ರಮುಖ ಹೊಣೆಗಾರಿಕೆಯ ಸ್ಥಾನಗಳಲ್ಲಿ

ಶ್ರೀ ಬಿರ್ಲಾ ಅವರು ವಿವಿಧ ನಿಯಂತ್ರಕ ಮತ್ತು ವೃತ್ತಿಪರ ಮಂಡಳಿಗಳಲ್ಲಿ ಅನೇಕ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ಮಂಡಳಿಯಲ್ಲಿ ಅವರು ನಿರ್ದೇಶಕರಾಗಿದ್ದರು. ಕಂಪನಿ ವ್ಯವಹಾರಗಳ ಸಚಿವಾಲಯ ರಚಿಸಿದ ಸಲಹಾ ಸಮಿತಿಗೆ ಅವರು ಅಧ್ಯಕ್ಷರಾಗಿದ್ದರು ಮತ್ತು ವ್ಯಾಪಾರ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಭಾರತದ ಪ್ರಧಾನ ಮಂತ್ರಿಗಳ ಸಲಹಾ ಮಂಡಳಿಯಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.

ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಮಂಡಳಿ (ಸೆಬಿ) ಸಮಿತಿಯ ಅಧ್ಯಕ್ಷರಾಗಿ, "ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ಕುಮಾರ ಮಂಗಲಂ ಬಿರ್ಲಾ ವರದಿ" ಅನ್ನು ಅವರು ಮಂಡನೆ ಮಾಡಿದರು. ಅದರಲ್ಲಿನ ಶಿಫಾರಸುಗಳು ವಿನೂತನವಾಗಿದ್ದವು ಮತ್ತು ಕಾರ್ಪೊರೇಟ್ ಆಡಳಿತದ ನಿಯಮಗಳಿಗೆ ಬುನಾದಿಯಾದವು. ಮುಂದುವರಿದು, ಆಡಳಿತಾತ್ಮಕ ಮತ್ತು ಕಾನೂನು ಸರಳೀಕರಣ ಕುರಿತ ಪ್ರಧಾನ ಮಂತ್ರಿಗಳ ಕಾರ್ಯಪಡೆಯ ಸಂಚಾಲಕರಾಗಿ ತಮ್ಮ ವರದಿಯಲ್ಲಿ ಅವರು ಮಾಡಿದ ವಿಸ್ತೃತವಾದ ಶಿಫಾರಸುಗಳನ್ನು ಒಟ್ಟಾರೆಯಾಗ ಅನುಷ್ಠಾನಗೊಳಿಸಲಾಗಿದೆ. ಇನ್‌ಸೈಡರ್ ಟ್ರೇಡಿಂಗ್ ಕುರಿತ ಸೆಬಿಯ ಸಮಿತಿ ಅಧ್ಯಕ್ಷರಾಗಿಯೂ ಶ್ರೀ ಬಿರ್ಲಾ ಅವರು ಕಾರ್ಯನಿರ್ವಹಿಸಿದ್ದು, ಭಾರತೀಯ ಕಾರ್ಪೊರೇಟ್‌ಗಳಿಗಾಗಿ ಕಾರ್ಪೊರೇಟ್ ಆಡಳಿತ ಸಿದ್ಧಾಂತಗಳನ್ನು ರೂಪಿಸಿದ್ದಾರೆ.  

ಭಾರತೀಯ ಉದ್ಯಮಗಳ ಸಂಘಟನೆಯ ರಾಷ್ಟ್ರೀಯ ಮಂಡಳಿ ಮತ್ತು ಭಾರತೀಯ ವಾಣಿಜ್ಯ ಮತ್ತು ಉದ್ಯಮಗಳ ಅಸೋಸಿಯೇಟೆಡ್ ಚೇಂಬರ್ಸ್‌ನ ಸರ್ವೋಚ್ಛ ಸಲಹಾ ಮಂಡಳಿಯಲ್ಲಿ ಅವರು ಇದ್ದಾರೆ.

ಶೈಕ್ಷಣಿಕ ಸಂಸ್ಥೆಗಳ ಮಂಡಳಿಗಳಲ್ಲಿ

ಶ್ರೀ ಬಿರ್ಲಾ ಅವರು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಆಸ್ಥೆಯಿಂದ ತೊಡಗಿಕೊಂಡಿದ್ದಾರೆ. ಪಿಲಾನಿ, ಗೋವಾ, ಹೈದರಾಬಾದ್ ಮತ್ತು ದುಬೈನಲ್ಲಿ ಕ್ಯಾಂಪಸ್‌ಗಳನ್ನು ಹೊಂದಿರುವ ಪ್ರಖ್ಯಾತ ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ (ಬಿಐಟಿಎಸ್) ಇದರ ಛಾನ್ಸೆಲರ್ ಆಗಿದ್ದಾರೆ.

ಶ್ರೀ ಬಿರ್ಲಾ ಅವರು ಐಐಎಂ, ಅಹ್ಮದಾಬಾದ್‌ನ ಅಧ್ಯಕ್ಷರಾಗಿದ್ದಾರೆ.

ಅವರು ಜಿ.ಡಿ. ಬಿರ್ಲಾ ವೈದ್ಯಕೀಯ ಸಂಶೋಧನಾ ಮತ್ತು ಶೈಕ್ಷಣಿಕ ಫೌಂಡೇಶನ್‌ನ ನಿರ್ದೇಶಕರಾಗಿದ್ದಾರೆ.

ಅವರು ಲಂಡನ್‌ ಬ್ಯುಸಿನೆಸ್ ಸ್ಕೂಲ್‌ನ ಏಷ್ಯಾ ಪೆಸಿಫಿಕ್ ಸಲಹಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಲಂಡನ್ ಬ್ಯುಸಿನೆಸ್ ಸ್ಕೂಲ್‌ನ ಗೌರವ ಸದಸ್ಯರಾಗಿದ್ದಾರೆ.

ಶ್ರೀ ಬಿರ್ಲಾ ಅವರು ರೋಡ್ಸ್ ಇಂಡಿಯಾ ಸ್ಕಾಲರ್‌ಶಿಪ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಶ್ರೀ ಬಿರ್ಲಾ ಅವರಿಗೆ ಸಂದ ಬಿರುದು ಸನ್ಮಾನಗಳು

ಶ್ರೀ ಬಿರ್ಲಾ ಅವರು ನಾಯಕತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳು/ವ್ಯವಸ್ಥೆಗಳ ನಿರ್ಮಾಣಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಮನ್ನಣೆಯನ್ನು ಗಳಿಸಿದ್ದಾರೆ. ಆಯ್ದ ಪಟ್ಟಿ ಇಲ್ಲಿದೆ:

  • ಇಂಡಿಯಾ ಟುಡೇ ನಿಯತಕಾಲಿಕೆಯ "ಪ್ರಭಾವಶಾಲಿಗಳು - ಪವರ್ ಲಿಸ್ಟ್ 2018" ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
  • ಸಿಎನ್‌ಬಿಸಿ-ಟಿವಿ18 - ಐಬಿಎಲ್‌ಎ "2017ರ ಅತ್ಯುತ್ತಮ ಉದ್ಯಮಿ"
  • ಫ್ರಾಸ್ಟ್ ಮತ್ತು ಸಲಿವಾನ್ - ಜಿಐಎಲ್ ವಿಷನರಿ ಲೀಡರ್‌ಶಿಪ್ ಅವಾರ್ಡ್ 2* ಎಬಿಎಲ್‌ಎಫ್ ಗ್ಲೋಬಲ್ ಏಷ್ಯನ್ ಅವಾರ್ಡ್ 2019
  • ಅಮಿಟಿ ಯುನಿವರ್ಸಿಟಿ, ಹರಿಯಾಣ - 'ಡಾಕ್ಟರ್ ಆಫ್ ಫಿಲಾಸಫಿ (ಡಿ.ಫಿಲ್) ಗೌರವ ಡಾಕ್ಟರೇಟ್', 2019
  • ಸಿಎನ್‌ಬಿಸಿ-ಟಿವಿ18 - ಐಬಿಎಲ್‌ಎ "2017ರ ಅತ್ಯುತ್ತಮ ಉದ್ಯಮಿ"
  • ಫ್ರಾಸ್ಟ್ ಮತ್ತು ಸಲಿವಾನ್ - 'ದ ಜಿಐಎಲ್ ವಿಷನರಿ ಲೀಡರ್‌ಶಿಪ್ ಅವಾರ್ಡ್' (ಗ್ಲೋಬಲ್ ಇನೋವೇಶನ್ ಅವಾರ್ಡ್) 2017
  • ಇಂಟರ್‌ನ್ಯಾಷನಲ್ ಅಡ್ವಟೈಸಿಂಗ್ ಅಸೋಸಿಯೇಷನ್‌ನ (ಐಎಎ) 'ಸಿಇಒ ಆಫ್‌ ದ ಇಯರ್ ಅವಾರ್ಡ್ 2016'
  • ರೋಟರಿ ಕ್ಲಬ್ ಆಫ್ ಮುಂಬೈ – ಗೌರವ ಸದಸ್ಯರಾಗಿ ಆಯ್ಕೆ (ನವೆಂಬರ್ 2014)
  • ಹಲೋ ಹಾಲ್ ಆಫ್ ಫೇಮ್ – 2014 ನೇ ವರ್ಷದ ಉದ್ಯಮ ನಾಯಕ (ನವೆಂಬರ್ 2014)
  • ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) '2014 ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್'
  • ಬ್ಯುಸಿನೆಸ್ ಲೀಡರ್ ಆಫ್‌ ದ ಇಯರ್', ಎಕನಾಮಿಕ್ ಟೈಮ್ಸ್ ಅವಾರ್ಡ್ಸ್ ಫಾರ್ ಕಾರ್ಪೊರೇಟ್ ಎಕ್ಸಲೆನ್ಸ್, 2012-13
  • ಎಕನಾಮಿಕ್‌ ಟೈಮ್ಸ್‌ನ ಕಾರ್ಪೊರೇಟ್ ಇಂಡಿಯಾದ 100 ಸಿಇಒಗಳ ಖಚಿತ ಪವರ್ ಲಿಸ್ಟಿಂಗ್‌ನಲ್ಲಿ '4ನೇ ಅತ್ಯಂತ ಪ್ರಭಾವಿ ಸಿಇಒ (2013) ಮಾನ್ಯತೆ 
  • ಇಂದೋರ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಪ್ರಶಸ್ತಿ 'ರಾಷ್ಟ್ರೀಯ ಭಾರತೀಯ ಬ್ಯುಸಿನೆಸ್ ಐಕಾನ್', 2013
  • ಫೋರ್ಬ್ಸ್‌ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ - ಫ್ಲ್ಯಾಗ್‌ಶಿಪ್ ಅವಾರ್ಡ್ '2012 ರ ನವೋದ್ಯಮಿ ಪ್ರಶಸ್ತಿ'
  • ಎನ್‌ಡಿಟಿವಿ ಪ್ರಾಫಿಟ್ ಉದ್ಯಮ ನಾಯಕತ್ವ ಪ್ರಶಸ್ತಿಗಳು 2012 - 'ಅತ್ಯಂತ ಪ್ರೇರಕ ನಾಯಕ'
  • 2012 ರಲ್ಲಿ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 'ದೇಶದಲ್ಲಿನ ಬಹು ಶಿಸ್ತಿನ ಎಂಜಿನಿಯರಿಂಗ್ ವಿಚಾರ ಪ್ರಕ್ರಿಯೆಗಳನ್ನು ಒಳಗೊಂಡ ಅದ್ಭುತ ಎಂಜಿನಿಯರಿಂಗ್ ಉತ್ಪನ್ನಗಳನ್ನು ಮುನ್ನಡೆಸುವಲ್ಲಿನ' ಅವರ ಪಾತ್ರಕ್ಕಾಗಿ ಡಾಕ್ಟರ್ ಆಫ್ ಸೈನ್ಸ್ (ಗೌರವ ಡಾಕ್ಟರೇಟ್) ಪ್ರದಾನ.
  • ನಾಸ್ಕಾಮ್‌ನ 'ಜಾಗತಿಕ ಉದ್ಯಮ ನಾಯಕ ಪ್ರಶಸ್ತಿ' 2012.
  • ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದದ್ದಕ್ಕಾಗಿ' ಸಿಎನ್‌ಬಿಸಿ-ಟಿವಿ18 ಇಂಡಿಯಾ ಬ್ಯುಸಿನೆಸ್ ಲೀಡರ್ ಅವಾರ್ಡ್ 2012
  • ಕೊಂಡೆ ನಾಸ್ಟ್ ಗ್ಲೋಬಲ್ ಇದರ ಸಹಸಂಸ್ಥೆಯಾದ ಕೊಂಡೆ ನಾಸ್ಟ್ ಇಂಡಿಯಾ ಪ್ರೈ. ಲಿ. ಇವರಿಂದ 'ಜಿಕ್ಯೂ ಬ್ಯುಸಿನೆಸ್ ಲೀಡರ್ ಆಫ್‌ ದ ಇಯರ್ ಅವಾರ್ಡ್ -2011'
  • ಅತ್ಯುತ್ತಮ ಕಾರ್ಯಪ್ರದರ್ಶನದ ಉದ್ಯಮಿ ಆಗಿದ್ದಕ್ಕೆ ಮತ್ತು ಉದಯೋನ್ಮುಖ ವಲಯ ಸೇರಿದಂತೆ ಬಹುತೇಕ ವ್ಯವಹಾರಗಳಲ್ಲಿ ಯಶಸ್ಸು ಗಳಿಸಿದ್ದಕ್ಕಾಗಿ', 'ಸಿಎನ್‌ಎನ್‌-ಐಬಿಎನ್ ಇಂಡಿಯನ್ ಆಫ್ ದ ಇಯರ್ 2010- ಉದ್ಯಮ' ಪ್ರಶಸ್ತಿ 
  • ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ (ಎಐಎಂಎ), ಮ್ಯಾನೇಜಿಂಗ್ ಇಂಡಿಯಾ ಅವಾರ್ಡ್ಸ್ 2010 'ಬ್ಯುಸಿನೆಸ್ ಲೀಡರ್ ಆಫ್ ದ ಇಯರ್' 2010
  • ಎಐಎಂಎ - 'ಆರ್‌ಡಿ ಟಾಟಾ ಕಾರ್ಪೊರೇಟ್ ಲೀಡರ್‌ಶಿಪ್ ಅವಾರ್ಡ್' 2008
  • 2008 ರಲ್ಲಿ ಜಿಡಿ ಪಂಥ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ "ವ್ಯವಹಾರ ಆಡಳಿತದಲ್ಲಿನ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ" ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ (ಗೌರವ ಡಾಕ್ಟರೇಟ್)
  • ತಂತ್ರಜ್ಞಾನಗಳ ಬೆಳವಣಿಗೆಗಾಗಿ ಹಾಗೂ ಉದ್ಯಮಗಳ ಕ್ಷೇತ್ರದಲ್ಲಿ ದೇಶವನ್ನು ಇತರ ದೇಶಗಳ ಮಟ್ಟಕ್ಕೆ ತರುವಲ್ಲಿನ ಅವರ ಪಾತ್ರಕ್ಕಾಗಿ' ತಮಿಳುನಾಡಿನ ಎಸ್‌ಆರ್‌ಎಂ ವಿಶ್ವವಿದ್ಯಾಲಯ 2008 ರಲ್ಲಿ ಸಾಹಿತ್ಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು 
  • ಏಷ್ಯಾ ಪೆಸಿಫಿಕ್ ಗ್ಲೋಬಲ್ ಎಚ್‌ಆರ್ ಎಕ್ಸಲೆನ್ಸ್ - 'ಅಸಾಧಾರಣ ನಾಯಕ' ಪ್ರಶಸ್ತಿ, 2007
  • ಉದ್ಯಮ ನಾಯಕ ಪ್ರಶಸ್ತಿಗಳ ವಿಭಾಗದಲ್ಲಿ ಎನ್‌ಡಿಟಿವಿ ಪ್ರಾಫಿಟ್‌ನಿಂದ 2007 ರಲ್ಲಿ 'ವರ್ಷದ ಜಾಗತಿಕ ಭಾರತ ನಾಯಕ' ಪ್ರಶಸ್ತಿ
  • ಲಕ್ಷ್ಮೀಪತ್ ಸಿಂಘಾನಿಯಾ - ಐಐಎಂ, ಲಖನೌ 'ನ್ಯಾಷನಲ್ ಲೀಡರ್‌ಶಿಪ್ ಬ್ಯುಸಿನೆಸ್ ಲೀಡರ್', 2006
  • ಜೂನ್ 2006 ರಲ್ಲಿ ಮೊನಾಕೊದ ಮೊಂಟೆ ಕಾರ್ಲೊದಲ್ಲಿ ಅರ್ನೆಸ್ಟ್ ಮತ್ತು ಯಂಗ್ ವರ್ಲ್ಡ್ ಎಂಟರ್‌ಪ್ರಿನ್ಯೂರ್ ಅವಾರ್ಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಇಲ್ಲಿ ಅವರನ್ನು 'ಅರ್ನೆಸ್ಟ್ ಮತ್ತು ಯಂಗ್ ವರ್ಲ್ಡ್ ಎಂಟರ್‌ಪ್ರಿನ್ಯೂರ್ ಆಫ್‌ ದ ಇಯರ್ ಅಕಾಡೆಮಿ ಸದಸ್ಯರನ್ನಾಗಿ' ಆಯ್ಕೆ ಮಾಡಲಾಯಿತು
  • ಬ್ಯುಸಿನೆಸ್ ಟುಡೇ ಇಂದ 2005 ರಲ್ಲಿ 'ಸಿಇಒ ಕೆಟಗರಿಯಲ್ಲಿ ಯಂಗ್ ಸೂಪರ್ ಪರ್‌ಫಾರ್ಮರ್' ಪ್ರಶಸ್ತಿ
  • ಬ್ಯುಸಿನೆಸ್ ಟುಡೇ ಇಂದ 2005 ರಲ್ಲಿ 'ಸಿಇಒ ಕೆಟಗರಿಯಲ್ಲಿ ಯಂಗ್ ಸೂಪರ್ ಪರ್‌ಫಾರ್ಮರ್' ಪ್ರಶಸ್ತಿ
  • 2004 ರಲ್ಲಿ ವಿಶ್ವ ಆರ್ಥಿಕ ವೇದಿಕೆ (ದಾವೋಸ್) ನಿಂದ 'ಯುವ ಜಾಗತಿಕ ನಾಯಕರು' ವಿಭಾಗದಲ್ಲಿ ಒಬ್ಬರಾಗಿ ಆಯ್ಕೆ
  • 2004 ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
  • 2004 ರಲ್ಲಿ ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನಿಂದ 'ಗೌರವ ಸದಸ್ಯತ್ವ'
  • 2002-2003 ರಲ್ಲಿ ಕಾರ್ಪೊರೇಟ್ ಶ್ರೇಷ್ಠತೆಗಾಗಿ 'ಬ್ಯುಸಿನೆಸ್ ಲೀಡರ್ ಆಫ್ ದ ಇಯರ್' ಎಕನಾಮಿಕ್ ಟೈಮ್ಸ್ ಅವಾರ್ಡ್ 
  • ಬ್ಯುಸಿನೆಸ್ ಇಂಡಿಯಾದಿಂದ 'ಬ್ಯುಸಿನೆಸ್ ಮ್ಯಾನ್ ಆಫ್ ದ ಇಯರ್-2003' ಪ್ರಶಸ್ತಿ
  • 2001 ರಲ್ಲಿ ಮುಂಬೈ ಪ್ರದೇಶ ಯುವ ಕಾಂಗ್ರೆಸ್‌ನಿಂದ 'ಉದ್ಯಮ ಶ್ರೇಷ್ಠತೆ ಮತ್ತು ದೇಶಕ್ಕೆ ನೀಡಿದ ಕೊಡುಗೆಗಾಗಿ' ರಾಜೀವ್ ಗಾಂಧಿ ಪ್ರಶಸ್ತಿ
  • ರಾಷ್ಟ್ರೀಯ ಎಚ್‌ಆರ್‌ಡಿ ನೆಟ್‌ವರ್ಕ್, 'ವರ್ಷದ ಅತ್ಯುತ್ತಮ ಉದ್ಯಮಿ' 2001
  • ಇನ್ಸ್‌ಟಿಟ್ಯೂಟ್ ಆಫ್ ಡೈರೆಕ್ಟರ್ಸ್‌ ಅವರ 'ಗೋಲ್ಡನ್ ಪೀಕಾಕ್ ನ್ಯಾಷನಲ್ ಅವಾರ್ಡ್ ಫಾರ್ ಬ್ಯುಸಿನೆಸ್ ಲೀಡರ್‌ಶಿಪ್' 2001
  • ಹಿಂದುಸ್ತಾನ್ ಟೈಮ್ಸ್ 'ಬ್ಯುಸಿನೆಸ್‌ಮ್ಯಾನ್ ಆಫ್ ದ ಇಯರ್' 2001
  • ದ ಬಾಂಬೆ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ - 'ದ ಮ್ಯಾನೇಜ್‌ಮೆಂಟ್ ಮ್ಯಾನ್ ಆಫ್ ದ ಇಯರ್ 1999-2000'
  • ಅಮಂಗ್ ದ 10 ಸೂಪರ್ ಸ್ಟಾರ್ಸ್ ಆಫ್‌ ಕಾರ್ಪೊರೇಟ್ ಫೈನಾನ್ಸ್' - ಗ್ಲೋಬಲ್ ಫೈನಾನ್ಸ್ 1998
  • ಭಾರತದ ಅತ್ಯಂತ ಪ್ರಶಂಸನೀಯ ಮತ್ತು ಗೌರವಾನ್ವಿತ ಸಿಇಒಗಳು ಮತ್ತು ಮುಂಬರುವ ಶತಮಾನದ ಅಗ್ರ ಸಿಇಒಗಳು' ಬ್ಯುಸಿನೆಸ್‌ ವರ್ಲ್ಡ್, 1998 017
  • ಇಂಟರ್‌ನ್ಯಾಷನಲ್ ಅಡ್ವಟೈಸಿಂಗ್ ಅಸೋಸಿಯೇಷನ್‌ನ (ಐಎಎ) 'ಸಿಇಒ ಆಫ್‌ ದ ಇಯರ್ ಅವಾರ್ಡ್ 2016'
  • ರೋಟರಿ ಕ್ಲಬ್ ಆಫ್ ಮುಂಬೈ – ಗೌರವ ಸದಸ್ಯರಾಗಿ ಆಯ್ಕೆ (ನವೆಂಬರ್ 2014)
  • ಹಲೋ ಹಾಲ್ ಆಫ್ ಫೇಮ್ – 2014 ನೇ ವರ್ಷದ ಉದ್ಯಮ ನಾಯಕ (ನವೆಂಬರ್ 2014)
  • ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) "2014 ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್"
  • ಬ್ಯುಸಿನೆಸ್ ಲೀಡರ್ ಆಫ್‌ ದ ಇಯರ್', ಎಕನಾಮಿಕ್ ಟೈಮ್ಸ್ ಅವಾರ್ಡ್ಸ್ ಫಾರ್ ಕಾರ್ಪೊರೇಟ್ ಎಕ್ಸಲೆನ್ಸ್, 2012-13
  • ಎಕನಾಮಿಕ್‌ ಟೈಮ್ಸ್‌ನ ಕಾರ್ಪೊರೇಟ್ ಇಂಡಿಯಾದ 100 ಸಿಇಒಗಳ ಖಚಿತ ಪವರ್ ಲಿಸ್ಟಿಂಗ್‌ನಲ್ಲಿ '4ನೇ ಅತ್ಯಂತ ಪ್ರಭಾವಿ ಸಿಇಒ (2013) ಮಾನ್ಯತೆ 
  • ಇಂದೋರ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಪ್ರಶಸ್ತಿ 'ರಾಷ್ಟ್ರೀಯ ಭಾರತೀಯ ಬ್ಯುಸಿನೆಸ್ ಐಕಾನ್', 2013
  • ಫೋರ್ಬ್ಸ್‌ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ - ಫ್ಲ್ಯಾಗ್‌ಶಿಪ್ ಅವಾರ್ಡ್ '2012 ರ ನವೋದ್ಯಮಿ ಪ್ರಶಸ್ತಿ'
  • ಎನ್‌ಡಿಟಿವಿ ಪ್ರಾಫಿಟ್ ಉದ್ಯಮ ನಾಯಕತ್ವ ಪ್ರಶಸ್ತಿಗಳು 2012 - 'ಅತ್ಯಂತ ಪ್ರೇರಕ ನಾಯಕ'
  • 2012 ರಲ್ಲಿ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 'ದೇಶದಲ್ಲಿನ ಬಹು ಶಿಸ್ತಿನ ಎಂಜಿನಿಯರಿಂಗ್ ವಿಚಾರ ಪ್ರಕ್ರಿಯೆಗಳನ್ನು ಒಳಗೊಂಡ ಅದ್ಭುತ ಎಂಜಿನಿಯರಿಂಗ್ ಉತ್ಪನ್ನಗಳನ್ನು ಮುನ್ನಡೆಸುವಲ್ಲಿನ' ಅವರ ಪಾತ್ರಕ್ಕಾಗಿ ಡಾಕ್ಟರ್ ಆಫ್ ಸೈನ್ಸ್ (ಗೌರವ ಡಾಕ್ಟರೇಟ್) ಪ್ರದಾನ.
  • ನಾಸ್ಕಾಮ್‌ನ 'ಜಾಗತಿಕ ಉದ್ಯಮ ನಾಯಕ ಪ್ರಶಸ್ತಿ' 2012.
  • ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದದ್ದಕ್ಕಾಗಿ' ಸಿಎನ್‌ಬಿಸಿ-ಟಿವಿ18 ಇಂಡಿಯಾ ಬ್ಯುಸಿನೆಸ್ ಲೀಡರ್ ಅವಾರ್ಡ್ 2012
  • ಕೊಂಡೆ ನಾಸ್ಟ್ ಗ್ಲೋಬಲ್ ಇದರ ಸಹಸಂಸ್ಥೆಯಾದ ಕೊಂಡೆ ನಾಸ್ಟ್ ಇಂಡಿಯಾ ಪ್ರೈ. ಲಿ. ಇವರಿಂದ 'ಜಿಕ್ಯೂ ಬ್ಯುಸಿನೆಸ್ ಲೀಡರ್ ಆಫ್‌ ದ ಇಯರ್ ಅವಾರ್ಡ್ -2011'
  • ಅತ್ಯುತ್ತಮ ಕಾರ್ಯಪ್ರದರ್ಶನದ ಉದ್ಯಮಿ ಆಗಿದ್ದಕ್ಕೆ ಮತ್ತು ಉದಯೋನ್ಮುಖ ವಲಯ, 2010 ಸೇರಿದಂತೆ ಬಹುತೇಕ ವ್ಯವಹಾರಗಳಲ್ಲಿ ಯಶಸ್ಸು ಗಳಿಸಿದ್ದಕ್ಕಾಗಿ', 'ಸಿಎನ್‌ಎನ್‌-ಐಬಿಎನ್ ಇಂಡಿಯನ್ ಆಫ್ ದ ಇಯರ್ 2010- ಉದ್ಯಮ' ಪ್ರಶಸ್ತಿ 
  • ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ (ಎಐಎಂಎ), ಮ್ಯಾನೇಜಿಂಗ್ ಇಂಡಿಯಾ ಅವಾರ್ಡ್ಸ್ 2010 'ಬ್ಯುಸಿನೆಸ್ ಲೀಡರ್ ಆಫ್ ದ ಇಯರ್' 2010
  • ಎಐಎಂಎ - 'ಆರ್‌ಡಿ ಟಾಟಾ ಕಾರ್ಪೊರೇಟ್ ಲೀಡರ್‌ಶಿಪ್ ಅವಾರ್ಡ್' 2008
  • 2008 ರಲ್ಲಿ ಜಿಡಿ ಪಂಥ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ "ವ್ಯವಹಾರ ಆಡಳಿತದಲ್ಲಿನ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ" ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ (ಗೌರವ ಡಾಕ್ಟರೇಟ್)
  • ತಂತ್ರಜ್ಞಾನಗಳ ಬೆಳವಣಿಗೆಗಾಗಿ ಹಾಗೂ ಉದ್ಯಮಗಳ ಕ್ಷೇತ್ರದಲ್ಲಿ ದೇಶವನ್ನು ಇತರ ದೇಶಗಳ ಮಟ್ಟಕ್ಕೆ ತರುವಲ್ಲಿನ ಅವರ ಪಾತ್ರಕ್ಕಾಗಿ' ತಮಿಳುನಾಡಿನ ಎಸ್‌ಆರ್‌ಎಂ ವಿಶ್ವವಿದ್ಯಾಲಯ 2008 ರಲ್ಲಿ ಸಾಹಿತ್ಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು 
  • ಏಷ್ಯಾ ಪೆಸಿಫಿಕ್ ಗ್ಲೋಬಲ್ ಎಚ್‌ಆರ್ ಎಕ್ಸಲೆನ್ಸ್ - 'ಅಸಾಧಾರಣ ನಾಯಕ' ಪ್ರಶಸ್ತಿ, 2007
  • ಉದ್ಯಮ ನಾಯಕ ಪ್ರಶಸ್ತಿಗಳ ವಿಭಾಗದಲ್ಲಿ ಎನ್‌ಡಿಟಿವಿ ಪ್ರಾಫಿಟ್‌ನಿಂದ 2007 ರಲ್ಲಿ 'ವರ್ಷದ ಜಾಗತಿಕ ಭಾರತ ನಾಯಕ' ಪ್ರಶಸ್ತಿ
  • ಜೂನ್ 2006 ರಲ್ಲಿ ಮೊನಾಕೊದ ಮೊಂಟೆ ಕಾರ್ಲೊದಲ್ಲಿ ಅರ್ನೆಸ್ಟ್ ಮತ್ತು ಯಂಗ್ ವರ್ಲ್ಡ್ ಎಂಟರ್‌ಪ್ರಿನ್ಯೂರ್ ಅವಾರ್ಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಇಲ್ಲಿ ಅವರನ್ನು 'ಅರ್ನೆಸ್ಟ್ ಮತ್ತು ಯಂಗ್ ವರ್ಲ್ಡ್ ಎಂಟರ್‌ಪ್ರಿನ್ಯೂರ್ ಆಫ್‌ ದ ಇಯರ್ ಅಕಾಡೆಮಿ ಸದಸ್ಯರನ್ನಾಗಿ' ಆಯ್ಕೆ ಮಾಡಲಾಯಿತು
  • ದ ಅರ್ನೆಸ್ಟ್ ಮತ್ತು ಯಂಗ್ ಎಂಟರ್‌ಪ್ರಿನ್ಯೂರ್ ಆಫ್ ದ ಇಯರ್' ಅವಾರ್ಡ್ 2005
  • ಬ್ಯುಸಿನೆಸ್ ಟುಡೇ ಇಂದ 2005 ರಲ್ಲಿ 'ಸಿಇಒ ಕೆಟಗರಿಯಲ್ಲಿ ಯಂಗ್ ಸೂಪರ್ ಪರ್‌ಫಾರ್ಮರ್' ಪ್ರಶಸ್ತಿ
  • 2004 ರಲ್ಲಿ ವಿಶ್ವ ಆರ್ಥಿಕ ವೇದಿಕೆ (ದಾವೋಸ್) ನಿಂದ 'ಯುವ ಜಾಗತಿಕ ನಾಯಕರು' ವಿಭಾಗದಲ್ಲಿ ಒಬ್ಬರಾಗಿ ಆಯ್ಕೆ
  • 2004 ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
  • 2004 ರಲ್ಲಿ ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನಿಂದ 'ಗೌರವ ಸದಸ್ಯತ್ವ'
  • 2002-2003 ರಲ್ಲಿ ಕಾರ್ಪೊರೇಟ್ ಶ್ರೇಷ್ಠತೆಗಾಗಿ 'ಬ್ಯುಸಿನೆಸ್ ಲೀಡರ್ ಆಫ್ ದ ಇಯರ್' ಎಕನಾಮಿಕ್ ಟೈಮ್ಸ್ ಅವಾರ್ಡ್ 
  • ಬ್ಯುಸಿನೆಸ್ ಇಂಡಿಯಾದಿಂದ 'ಬ್ಯುಸಿನೆಸ್ ಮ್ಯಾನ್ ಆಫ್ ದ ಇಯರ್-2003' ಪ್ರಶಸ್ತಿ
  • 2001 ರಲ್ಲಿ ಮುಂಬೈ ಪ್ರದೇಶ ಯುವ ಕಾಂಗ್ರೆಸ್‌ನಿಂದ 'ಉದ್ಯಮ ಶ್ರೇಷ್ಠತೆ ಮತ್ತು ದೇಶಕ್ಕೆ ನೀಡಿದ ಕೊಡುಗೆಗಾಗಿ' ರಾಜೀವ್ ಗಾಂಧಿ ಪ್ರಶಸ್ತಿ
  • ರಾಷ್ಟ್ರೀಯ ಎಚ್‌ಆರ್‌ಡಿ ನೆಟ್‌ವರ್ಕ್, 'ವರ್ಷದ ಅತ್ಯುತ್ತಮ ಉದ್ಯಮಿ' 2001
  • ಇನ್ಸ್‌ಟಿಟ್ಯೂಟ್ ಆಫ್ ಡೈರೆಕ್ಟರ್ಸ್‌ ಅವರ 'ಗೋಲ್ಡನ್ ಪೀಕಾಕ್ ನ್ಯಾಷನಲ್ ಅವಾರ್ಡ್ ಫಾರ್ ಬ್ಯುಸಿನೆಸ್ ಲೀಡರ್‌ಶಿಪ್' 2001
  • ಹಿಂದುಸ್ತಾನ್ ಟೈಮ್ಸ್ 'ಬ್ಯುಸಿನೆಸ್‌ಮ್ಯಾನ್ ಆಫ್ ದ ಇಯರ್' 2001
  • ದ ಬಾಂಬೆ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ - 'ದ ಮ್ಯಾನೇಜ್‌ಮೆಂಟ್ ಮ್ಯಾನ್ ಆಫ್ ದ ಇಯರ್ 1999-2000'
  • ಅಮಂಗ್ ದ 10 ಸೂಪರ್ ಸ್ಟಾರ್ಸ್ ಆಫ್‌ ಕಾರ್ಪೊರೇಟ್ ಫೈನಾನ್ಸ್' - ಗ್ಲೋಬಲ್ ಫೈನಾನ್ಸ್ 1998
  • ಭಾರತದ ಅತ್ಯಂತ ಪ್ರಶಂಸನೀಯ ಮತ್ತು ಗೌರವಾನ್ವಿತ ಸಿಇಒಗಳು ಮತ್ತು ಮುಂಬರುವ ಶತಮಾನದ ಅಗ್ರ ಸಿಇಒಗಳು' ಬ್ಯುಸಿನೆಸ್‌ ವರ್ಲ್ಡ್, 1998

ಉದ್ಯಮದಾಚೆಗೆ: ಸಮಾಜದ ಅವಕಾಶ ವಂಚಿತ ಸಮುದಾಯಗಳಿಗೆ ನೆರವಿನ ಹಸ್ತ

ಟ್ರಸ್ಟೀಶಿಪ್ ಪರಿಕಲ್ಪನೆಯ ದೃಢ ಪರಿಪಾಲಕರಾಗಿರುವ ಶ್ರೀ ಬಿರ್ಲಾ ಆದಿತ್ಯ ಬಿರ್ಲಾ ಸಮೂಹದಲ್ಲಿ ಕಾಳಜಿ ಮಾಡುವ ಮತ್ತು ದಾನ ನೀಡುವ ಪರಿಕಲ್ಪನೆಯನ್ನು ಸಾಂಸ್ಥಿಕಗೊಳಿಸಿದ್ದಾರೆ. ಅವರ ಆದೇಶದೊಂದಿಗೆ, ಭಾರತ, ಥೈಲ್ಯಾಂಡ್, ಇಂಡೋನೇಷ್ಯಾ, ಫಿಲಿಫೈನ್ಸ್ ಮತ್ತು ಈಜಿಪ್ಟ್‌ನ ಕಡುಬಡವರಿರುವ ಗ್ರಾಮಗಳ ಸಮಾಜದ ದುರ್ಬಲ ವರ್ಗಗಳ ಜೀವನ ಮಟ್ಟ ಸುಧಾರಣೆಗಾಗಿ ನಿರ್ದಿಷ್ಟವಾಗಿ ಪರಿಣಾಮ ಬೀರುವ ಅರ್ಥಪೂರ್ಣ ಕಲ್ಯಾಣ ಆಧರಿತ ಚಟುವಟಿಕೆಗಳಲ್ಲಿ ಸಮೂಹ ತೊಡಗಿಕೊಂಡಿದೆ. 

ಶ್ರೀ ಬಿರ್ಲಾ ಅವರ ನಾಯಕತ್ವದಲ್ಲಿ, ಸಮೂಹದ ಸಿಎಸ್‌ಆರ್ ಹೂಡಿಕೆಯು ಸುಮಾರು ರೂ. 250 ಕೋಟಿಯಷ್ಟಿದೆ.

ಭಾರತದಲ್ಲಿ ಸಮೂಹವು 5000 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಾರ್ಷಿಕವಾಗಿ 7.5 ದಶಲಕ್ಷ ಜನರನ್ನು ತಲುಪುತ್ತಿದೆ ಮತ್ತು ಆರೋಗ್ಯ, ಶಿಕ್ಷಣ, ಸುಸ್ಥಿರ ಬದುಕು, ಮೂಲಸೌಕರ್ಯ ಮತ್ತು ಸಾಮಾಜಿಕ ಅನುಕೂಲಗಳ ಮೇಲೆ ಗಮನ ಕೇಂದ್ರೀಕರಿಸಿ ಶ್ರದ್ಧೆಯಿಂದ ರೂಪಿಸಿದ ಯೋಜನೆಗಳ ಮೂಲಕ ಅವರ ಜೀವನದಲ್ಲಿ ಬದಲಾವಣೆಯನ್ನು ತರುತ್ತಿದೆ. ಉದಾಹರಣೆಗೆ, ಸಮೂಹವು 56 ಶಾಲೆಗಳನ್ನು ನಡೆಸುತ್ತಿದ್ದು ಇಲ್ಲಿ 45,000 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಇವರಲ್ಲಿ ಸುಮಾರು 18,000 ಕ್ಕೂ ಹೆಚ್ಚು ಮಕ್ಕಳು ಅವಕಾಶವಂಚಿತ ಸಮುದಾಯದವರಾಗಿದ್ದಾರೆ. ಇದರ ಜೊತೆಗೆ, 100,000 ಕ್ಕೂ ಹೆಚ್ಚು ಯುವಸಮುದಾಯ ಸೇತುಬಂಧ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ವೃತ್ತಿ ತರಬೇತಿಯಿಂದ ಪ್ರಯೋಜನ ಪಡೆಯುತ್ತದೆ. ಅದರ 22 ಆಸ್ಪತ್ರೆಗಳು ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಮಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿವೆ. ಸುಸ್ಥಿರ ಬೆಳವಣಿಗೆಗಾಗಿನ ತನ್ನ ಬದ್ಧತೆಗೆ ಅನುಸಾರವಾಗಿ, ಕೊಲಂಬಿಯಾ ವಿಶ್ವವಿದ್ಯಾಯದ ಜೊತೆಗಿನ ಪಾಲುದಾರಿಕೆಯಲ್ಲಿ ಮುಂಬೈನಲ್ಲಿ ಕೊಲಂಬಿಯಾ ಗ್ಲೋಬಲ್ ಸೆಂಟರ್‌ನ ಅರ್ಥ್ ಇನ್ಸ್‌ಟಿಟ್ಯೂಟ್ ಅನ್ನು ಸ್ಥಾಪಿಸಿದೆ. ಸಂಸ್ಥೆಗಳಲ್ಲಿ ಸಿಎಸ್‌ಆರ್‌ ಅನ್ನು ಜೀವನ ವಿಧಾನವಾಗಿ ಅಳವಡಿಸಲು, ದೆಹಲಿಯಲ್ಲಿ ಫಿಕ್ಕಿ- ಆದಿತ್ಯ ಬಿರ್ಲಾ ಸಿಎಸ್‌ಆರ್ ಸೆಂಟರ್ ಫಾರ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದೆ.

ಶೈಕ್ಷಣಿಕ ಹಿನ್ನೆಲೆ

ಮುಂಬೈ ವಿಶ್ವವಿದ್ಯಾಲಯದ ವಾಣಿಜ್ಯ ಪದವೀಧರರಾಗಿರುವ ಶ್ರೀ ಬಿರ್ಲಾ ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಲಂಡನ್ ಬ್ಯುಸಿನೆಸ್ ಸ್ಕೂಲ್‌ನಿಂದ ಅವರು ಎಂಬಿಎ ಪದವಿ ಪಡೆದಿದ್ದಾರೆ.

ವೈಯಕ್ತಿಕ ವಿವರಗಳು

1967 ರ ಜೂನ್ 14 ರಂದು ಕೋಲ್ಕತಾದಲ್ಲಿ ಜನಿಸಿದ ಶ್ರೀ ಬಿರ್ಲಾ ಅವರು ಮುಂಬೈನಲ್ಲಿ ಬಾಲ್ಯ ಕಳೆದರು. ಶ್ರೀ ಬಿರ್ಲಾ ಮತ್ತು ಅವರ ಶ್ರೀಮತಿ ನೀರಜಾ ಬಿರ್ಲಾರಿಗೆ ಅನನ್ಯಶ್ರೀ, ಆರ್ಯಮಾನ್ ವಿಕ್ರಮ್ ಮತ್ತು ಅದ್ವೈತೇಷಾ ಎನ್ನುವ ಮೂರು ಮಕ್ಕಳಿದ್ದಾರೆ.

ಸಾಮಾಜಿಕ ಮಾಧ್ಯಮದ ಫೀಡ್

Tweets by @UltraTechCement

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ